Sunday, August 24, 2014

ಹಿಂದೂಧರ್ಮ ಮತ್ತು ದೇವರುಗಳು

ನಾನು ತುಂಬ ಮೆಚ್ಚಿಕೊಂಡ ಪುಸ್ತಕಗಳಲ್ಲಿ ಒಂದು:-
ಸ್ವಾಮಿ ಸೋಮನಾಥಾನಂದ ಅವರ
“ ಹೈಮಾಚಲ ಸಾನ್ನಿಧ್ಯದಲ್ಲಿ”(ಪ್ರವಾಸ ಕಥನ). ಅಮಮರನಾಥ, ಕೇದಾರ ಮತ್ತು ಬದರಿ ಯಾತ್ರೆಗಳು.

ಎಷ್ಟು ಸಾರಿ ಓದಿದರೂ ಮತ್ತೆ ಮತ್ತೆ ಓದಿಸಿಕೊಳ್ಳುವ ಈ ಕೃತಿ ಪಂಡಿತರೂ ಪಾಮರರನ್ನೆಲ್ಲ ಬೆರಗುಗೊಳಿಸಿಬಿಡುತ್ತದೆ.
ದೇವರು ಇಲ್ಲ ಎನ್ನುವವರನ್ನೂ ಆಲೋಚನೆಗೆ ಹಚ್ಚುತ್ತದೆ ಎಂದರೆ ಅದನ್ನು ಓದಿ ರಸಸ್ವಾದನೆ ಮತ್ತು ಚಿಂತನೆ ಮಾಡಿಯೇ ತಿಳಿಯಬೇಕು.
ಸ್ವಾಮೀಜಿಯವರ ಬರವಣಿಗೆಗೆ ಯಾರನ್ನೂ ಸೆಳೆದಿಡುವ ಶಕ್ತಿಯಿದೆ.

ಹಿಂದೂಧರ್ಮದಲ್ಲಿ ಅಸಂಖ್ಯ ದೇವರುಗಳು-
ಯಾತ್ರಾರ್ಥಿಗಳಾಗಿ ನಡೆದ ಸ್ವಾಮೀಜಿ ಹೇಳುತ್ತಾರೆ- “ಹಿಂದೂಗಳ ಕಲ್ಪನಾ ಪ್ರಪಂಚ ಅತಿ ಪ್ರಚಂಡವಾದದ್ದು. ನಮ್ಮ ದೇವತೆಗಳ ಸಂಖ್ಯೆ ಮಾನವ ಜನಸಂಖ್ಯೆಯನ್ನೂ ಕೂಡ ಮೀರಿರುವುದು! ಹಾಗೇ ಒಂದಂಗುಲ ಸ್ಥಳವನ್ನೂ ಹಿಂದೂ ಬಿಡಲೊಲ್ಲ. ಅಲ್ಲಿ ಏನನ್ನಾದರೂ ಕೊರೆಯಲಿಚ್ಚಿಸುವನು. ಅವನಿಗೆ ಖಾಲಿ ಜಾಗ ಇಷ್ಟು ಸ್ಥಳ ವ್ಯರ್ಥವಾಯಿತಲ್ಲ” ಎಂದು ಬೇಗುದಿ ತರುವುದು. ದೇವರನ್ನು ನಿರಾಕಾರ ನಿರ್ಗುಣ ಎಂದು ಸಾರಿದ ಧರ್ಮ ಇಷ್ಟೊಂದು ದೇವ ದೇವತೆಗಳು ಇಷ್ಟು ಹುಲುಸಾಗಿ ಬೆಳೆಯುವುದಕ್ಕೆ ಯಾವ ಗೊಬ್ಬರವನ್ನು ಹಾಕಿತೋ! ಅವ್ಯಕ್ತ, ನಿರಂಜನ,ನಿರ್ಗುಣವೆಂಬ ಗೊಬ್ಬರವನ್ನೇ ಹಾಕಿರಬೇಕು. ರೂಪ ಅಪರೂಪಕ್ಕೆ,ಗುಣ,ನಿರ್ಗುಣದೆಡೆಗೆ, ಆಕಾರ,ನಿರಾಕಾರದೆಡೆಗೆ ಹೋಗಬೇಕಾದರೆ ಇವೇ ಮೆಟ್ಟಿಲು.ಈ ಮೆಟ್ಟಲಿಲ್ಲದೇ ಇದ್ದರೆ ಆಕಾರದಿಂದ ನಿರಾಕಾರಕ್ಕೆ ಮನುಷ್ಯ ನೆಗೆಯಲಾರ. ಒಂದೇ ಒಂದು ದೇವರು,
ಈ ಆಕಾರವನ್ನೆಲ್ಲ ತಾಳಿರುವನು ಮತ್ತು ಇವನ್ನು ಮೀರಿರುವನು ಎಂದು ಸಾರುವುದು ಹಿಂದೂಧರ್ಮ.

ದೇವರ ವಿಗ್ರಹಗಳನ್ನು ಶಿಲಾ ಮೂರ್ತಿಗಳನ್ನು ಭಿನ್ನ ಮಾಡಿರುವುದರ ಬಗ್ಗೆ ಸ್ವಾಮೀಜಿ ಹೇಳುತ್ತಾರೆ-
ಕುತುಬ್ ಮೀನಾರಿನ ಸುತ್ತಲೂ ಕೆಲವು ಬಿದ್ದು ಹೋದ ಮಸೀದಿಗಳಿವೆ. ಅಲ್ಲಿರುವ ಕಂಬಗಳೆಲ್ಲಾ ಹಿಂದೂ ಹಿಂದೂ ದೇವಸ್ಥಾನದಂತಿರುವುವು. ಆ ಕಂಬಗಳ ಮೇಲೆ ಕೊರೆದಿರುವ ವಿಗ್ರಹವನ್ನು ಭಿನ್ನ ಮಾಡಿ ಸ್ವಲ್ಪ ಬದಲಾಯಿಸಿ ಅದನ್ನು ಮಸೀದಿ ಮಾಡಿರುವರು. ಅವರೇನೋ ಹಿಂದೂ ದೇವರನ್ನು ನಾಶಮಾಡಿರುವೆವೆಂದು ತಿಳಿದುಕೊಂಡಿರಬಹುದು. ಹಿಂದೂ ದೇವರಿಗೆ ಒಂದು ಆಕಾರವಿಲ್ಲ. ಒಂದು ಆಕಾರದಿಂದ ಅವನನ್ನು ಓಡಿಸಿದರೆ ಮತ್ತೊಂದು ಆಕಾರವನ್ನು ಅವನು ಸೇರುವನು! ಶಿವನಿಂದ ಓಡಿಸಿದರೆ ಅಲ್ಲನೊಳಗೇ ಅವನು ಸೇರುವನು. ಕೊನೆಗೆ ಎಲ್ಲಾ ಆಕಾರಗಳನ್ನು ನಾಶಮಾಡಿದರೂ ನಿರಾಕಾರನಾಗಿ ನಿಂತು ಮನುಷ್ಯರು ಹುಚ್ಚನ್ನು ನೋಡಿ ನಗುವನು..”

- ಸ್ವಾಮಿ ಸೋಮನಾಥಾನಂದರು, ತಮ್ಮ “ಈ ಹೈಮಾಚಲ ಸಾನ್ನಿಧ್ಯದಲ್ಲಿ” ಪುಸ್ತಕಕ್ಕೆ ಮುನ್ನುಡಿ ಬರೆದುಕೊಡಿ ಎಂದು ನಮ್ಮ ನಾಡಿನ ಮೆಚ್ಚಿನ ಕವಿ ಕುವೆಂಪು ಅವರನ್ನು ಕೇಳಿಕೊಂಡಾಗ,

“ನಿಮ್ಮ ಪುಸ್ತಕ ಓದುತ್ತೇನೆ, ಸಾಧ್ಯವಾದರೆ, ಪ್ರೇರಣೆಯಾದರೆ, ಬರೆಯುತ್ತೇನೆ. ಇಲ್ಲದಿದ್ದರೆ ಇಲ್ಲ. ನಾನು ಬರೆದುಕೊಡುತ್ತೇನೆಂದು ನೀವು ಬಂಬಲೂ ಬಾರದು, ನಿರೀಕ್ಷಿಸಲೂಬಾರದು” ಎಂದು ನಿರ್ದಾಕ್ಷಿಣ್ಯವಾಗಿ ಹೇಳಿದರಂತೆ. ಸ್ವಾಮೀಜಿವರೂ “ಆಗಲಿ” ಎಂದು ಹೇಳಿ ಹೊದರಂತೆ. ಕೊನೆಗೂ ಹದಿನಾಲ್ಕು ಪುಟಗಳಷ್ಟು ಮುನ್ನುಡಿ ಬರೆದು ಕೊಟ್ಟ ಕುವೆಂಪು ತಮ್ಮ ಮುನ್ನುಡಿಯಲ್ಲೇ ಹೀಗೆ ಬರೆಯುತ್ತಾರೆ. ಕುವೆಂಪು ಅವರ ಮುನ್ನುಡಿಯ ಸಾಲು ಸಾಲುಗಳೂ ಚೇತೋಹಾರಿಯಾಗಿವೆ...ನಮ್ಮನ್ನು ಚಿಂತನ ಶೀಲರನ್ನಾಗಿಸುತ್ತವೆ...

ನೋಡಿ ಅವಲೋಕನ- ಹೊಸಬೆಳಕು;ಹೊಸತಿರುವು!
ಸ್ವಾಮಿ ವಿವೇಕಾನಂದರಿಗೂ ಮುನ್ನ ಆಗಿ ಹೋದ ಮಹಾನ್ ಯೋಗಿ ಶ್ರೀ ಪರಮಹಂಸ ಯೋಗಾನಂದ ಅವರ ಮಾತುಗಳು ಮತ್ತು ಕೃತಿಗಳು ಚಿರಸ್ಥಾಯಿಯಾಗಿವೆ. ಅವರ ಉತ್ತರಾಧಿಕಾರಿಯೇನೋ ಸ್ವಾಮಿ ವಿವೇಕಾನಂದರು.

Tuesday, July 29, 2014

ದೇವರು ಇದ್ದಾನೆಯೇ..?

ದೇವರು ಇದ್ದಾನೆಯೇ..? ಎಂಬ ಪ್ರಶ್ನೆಗೆ ’ದೇವರಲ್ಲಿ ನೀವಿದ್ದೀರಾ" ಎಂದು ಮಾರ್ಮಿಕ ವಾಗಿ ಕೇಳಿದರಂತೆ ಶರಣರೊಬ್ಬರು. ಹೌದು, ದೇವರಲ್ಲಿ ನಂಬಿಕೆಯ ಬಗ್ಗೆ ಮಾತನಾಡಿದರೆ, ಜಾರಿಕೊಳ್ಳುವ ಸೋ ಕಾಲ್ಡ್ ಸ್ಕಾಲರ‍್ಸ್ ಇದ್ದಾರೆ. (ಅವರನ್ನು Most of the useless scholars, because they much read ಎಂಬ ಈ ಗುಂಪಿಗೆ ಸೇರಿಸಬಹುದು).  ಅಂಥ ಮೇಧಾವಿಗಳ ಸಂಖ್ಯೆ ಗೇನು ಕಡಿಮೆ ಇಲ್ಲ ಬಿಡಿ. ಹಾಗೆ ನೋಡಿದರೆ, ಪ್ರಪಂಚದಲ್ಲಿ ನಾಸ್ತಿಕ ರ ಸಂಖ್ಯೆ... ಹೇಗೇ ಬೆಳೆದರೂ ಕಡಿಮೆಯೇ ಇರುತ್ತದೆ; ಅವರಲ್ಲಿ ಬಹು ಮಂದಿ ಹೆಚ್ಚು ಓದಿಕೊಂಡ ಸೋ ಕಾಲ್ಡ್ ಸ್ಕಾಲರ‍್ಸ್ ಗಳೇ ಇರುತ್ತಾರೆ. ದಯವಿಟ್ಟು ಕ್ಷಮಿಸಿ, ಮಹಾನ್ ದೈವಭಕ್ತರಾದ ಮೇಧಾವಿಗಳಾದ ಪ್ರೊಫೆಸರುಗಳೂ, ವಿಜ್ಞಾನಿಗಳೂ ಆಗಿಹೋಗಿದ್ದಾರೆ. ಇತ್ತೀಚೆಗೆ ಉಪಗ್ರಹ ಉಡಾವಣೆಗೆ ಮುನ್ನ ದೇವಾಲಯಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿದ ವಿಜ್ಞಾನಿಗಳನ್ನೂ ನಾವು ನೋಡಿದ್ದೇವೆ. ಬದ್ಧಿವಂತಿಕೆಯೇ ಭಗವಂತನ ಆಲಯ "(Intellect is the temple of God). ಎಂದೇ ಹೇಳುತ್ತಾರೆ. See More

Thursday, June 26, 2014

ವಿಷಯೋಪ ಭೋಗಗಳು...

ಈ ಪ್ರಪಂಚದಲ್ಲಿ ಎಲ್ಲ ವಿಷಯೋಪ ಭೋಗಗಳು ಮಾಯೆ ಎನ್ನುವುದಾದರೆ, ಅವುಗಳಲ್ಲಿ ಮೊದಲ ಸ್ಥಾನ ಹೆಣ್ಣಿಗೇ. ಆಕೆಯ ಸೌಂದರ್ಯ ಸೆಳೆತ, ಶೃಂಗಾರಮಯ ಲಾವಣ್ಯಗಳು ಎಂಥ ಪುರುಷನನ್ನೂ ವಿಚಲಿತಗೊಳಿಸದಿರಲಾರವು. ಆದರೆ, ಮಾಯೆಯನ್ನು ಗೆಲ್ಲದೇನೆ ಸಾಮಾನ್ಯನೊಬ್ಬ ಮಹಾಪುರುಷನಾಗಲಾರ. ಹಾಗೆ ಗೆಲ್ಲುವುದಕ್ಕೆ ಅವನ ಅಸ್ರ್ರಯಾವುದಿರಬಹುದು? ಅದು ಅಸ್ಖಲಿತ ಮನೋಭಾವದ ವಾತ್ಸಲ್ಯವೊಂದೇ.  ಅಂದರೆ, ಹೆಂಡತಿಯಲ್ಲಿ ಪ್ರೀತಿಯ ಸ್ಪರ್ಶಕ್ಕಿಂತಲೂ ತಾಯಿಯ ಪ್ರೇಮಸ್ಪರ್ಶದಲ್ಲಿರುವ ಅದಮ್ಯ ಅನುಬಂಧವೇ ಅದಾಗಿದೆ.

Friday, June 20, 2014

ಪ್ರಕೃತಿ-ಸೌಂದರ್ಯ

ಪ್ರಕೃತಿ-ಸೌಂದರ್ಯ ವನ್ನೇ ದ್ವೇಷಿಸುವವ ಸಂನ್ಯಾಸಿಯಾದರೂ ತನ್ನೊಳಗೆ ಶಾಂತ, ಸ್ವಸ್ಥ ಹಾಗೂ ಸುಂದರ ಚಿತ್ತಲಹರಿಯನ್ನು ಹೊಂದಲಾರ. ಮನುಷ್ಯನಿಗೆ ಸುಂದರವಾದದ್ದನ್ನು ಪ್ರೀತಿಸುವುದು ಸ್ವಭಾವಜನ್ಯವಾಗಿರಬೇಕಲ್ಲ... ಆಗ ಬದುಕೂ ಸುಂದರ ಹೂವಿನಂತೆ ಅರಳಿ ಘಮಘಮಿಸುತ್ತದೆ. ಹಾಗಲ್ಲದೇ, ಸುಂದರ ಹೆಣ್ಣನ್ನು ಬೇಕೆಂತಲೇ ಕಿಚಾಯಿಸುವುದು, ಪೀಡಿಸುವುದು ಸ್ವಾಭಾವಿಕವಲ್ಲ ಸಭ್ಯತೆಯ ಲಕ್ಷಣವಲ್ಲ. ಅದೊಂದು ವಿಚಿತ್ರ ವಿಲಕ್ಷಣ ಮನೋವಿಕಾರವೇ ಆಗುತ್ತದೆ. ಅಷ್ಟೇ ದುಷ್ಪರಿಣಾಮನ್ನುಂಟು ಮಾಡುತ್ತದೆ.