Sunday, August 24, 2014

ಹಿಂದೂಧರ್ಮ ಮತ್ತು ದೇವರುಗಳು

ನಾನು ತುಂಬ ಮೆಚ್ಚಿಕೊಂಡ ಪುಸ್ತಕಗಳಲ್ಲಿ ಒಂದು:-
ಸ್ವಾಮಿ ಸೋಮನಾಥಾನಂದ ಅವರ
“ ಹೈಮಾಚಲ ಸಾನ್ನಿಧ್ಯದಲ್ಲಿ”(ಪ್ರವಾಸ ಕಥನ). ಅಮಮರನಾಥ, ಕೇದಾರ ಮತ್ತು ಬದರಿ ಯಾತ್ರೆಗಳು.

ಎಷ್ಟು ಸಾರಿ ಓದಿದರೂ ಮತ್ತೆ ಮತ್ತೆ ಓದಿಸಿಕೊಳ್ಳುವ ಈ ಕೃತಿ ಪಂಡಿತರೂ ಪಾಮರರನ್ನೆಲ್ಲ ಬೆರಗುಗೊಳಿಸಿಬಿಡುತ್ತದೆ.
ದೇವರು ಇಲ್ಲ ಎನ್ನುವವರನ್ನೂ ಆಲೋಚನೆಗೆ ಹಚ್ಚುತ್ತದೆ ಎಂದರೆ ಅದನ್ನು ಓದಿ ರಸಸ್ವಾದನೆ ಮತ್ತು ಚಿಂತನೆ ಮಾಡಿಯೇ ತಿಳಿಯಬೇಕು.
ಸ್ವಾಮೀಜಿಯವರ ಬರವಣಿಗೆಗೆ ಯಾರನ್ನೂ ಸೆಳೆದಿಡುವ ಶಕ್ತಿಯಿದೆ.

ಹಿಂದೂಧರ್ಮದಲ್ಲಿ ಅಸಂಖ್ಯ ದೇವರುಗಳು-
ಯಾತ್ರಾರ್ಥಿಗಳಾಗಿ ನಡೆದ ಸ್ವಾಮೀಜಿ ಹೇಳುತ್ತಾರೆ- “ಹಿಂದೂಗಳ ಕಲ್ಪನಾ ಪ್ರಪಂಚ ಅತಿ ಪ್ರಚಂಡವಾದದ್ದು. ನಮ್ಮ ದೇವತೆಗಳ ಸಂಖ್ಯೆ ಮಾನವ ಜನಸಂಖ್ಯೆಯನ್ನೂ ಕೂಡ ಮೀರಿರುವುದು! ಹಾಗೇ ಒಂದಂಗುಲ ಸ್ಥಳವನ್ನೂ ಹಿಂದೂ ಬಿಡಲೊಲ್ಲ. ಅಲ್ಲಿ ಏನನ್ನಾದರೂ ಕೊರೆಯಲಿಚ್ಚಿಸುವನು. ಅವನಿಗೆ ಖಾಲಿ ಜಾಗ ಇಷ್ಟು ಸ್ಥಳ ವ್ಯರ್ಥವಾಯಿತಲ್ಲ” ಎಂದು ಬೇಗುದಿ ತರುವುದು. ದೇವರನ್ನು ನಿರಾಕಾರ ನಿರ್ಗುಣ ಎಂದು ಸಾರಿದ ಧರ್ಮ ಇಷ್ಟೊಂದು ದೇವ ದೇವತೆಗಳು ಇಷ್ಟು ಹುಲುಸಾಗಿ ಬೆಳೆಯುವುದಕ್ಕೆ ಯಾವ ಗೊಬ್ಬರವನ್ನು ಹಾಕಿತೋ! ಅವ್ಯಕ್ತ, ನಿರಂಜನ,ನಿರ್ಗುಣವೆಂಬ ಗೊಬ್ಬರವನ್ನೇ ಹಾಕಿರಬೇಕು. ರೂಪ ಅಪರೂಪಕ್ಕೆ,ಗುಣ,ನಿರ್ಗುಣದೆಡೆಗೆ, ಆಕಾರ,ನಿರಾಕಾರದೆಡೆಗೆ ಹೋಗಬೇಕಾದರೆ ಇವೇ ಮೆಟ್ಟಿಲು.ಈ ಮೆಟ್ಟಲಿಲ್ಲದೇ ಇದ್ದರೆ ಆಕಾರದಿಂದ ನಿರಾಕಾರಕ್ಕೆ ಮನುಷ್ಯ ನೆಗೆಯಲಾರ. ಒಂದೇ ಒಂದು ದೇವರು,
ಈ ಆಕಾರವನ್ನೆಲ್ಲ ತಾಳಿರುವನು ಮತ್ತು ಇವನ್ನು ಮೀರಿರುವನು ಎಂದು ಸಾರುವುದು ಹಿಂದೂಧರ್ಮ.

ದೇವರ ವಿಗ್ರಹಗಳನ್ನು ಶಿಲಾ ಮೂರ್ತಿಗಳನ್ನು ಭಿನ್ನ ಮಾಡಿರುವುದರ ಬಗ್ಗೆ ಸ್ವಾಮೀಜಿ ಹೇಳುತ್ತಾರೆ-
ಕುತುಬ್ ಮೀನಾರಿನ ಸುತ್ತಲೂ ಕೆಲವು ಬಿದ್ದು ಹೋದ ಮಸೀದಿಗಳಿವೆ. ಅಲ್ಲಿರುವ ಕಂಬಗಳೆಲ್ಲಾ ಹಿಂದೂ ಹಿಂದೂ ದೇವಸ್ಥಾನದಂತಿರುವುವು. ಆ ಕಂಬಗಳ ಮೇಲೆ ಕೊರೆದಿರುವ ವಿಗ್ರಹವನ್ನು ಭಿನ್ನ ಮಾಡಿ ಸ್ವಲ್ಪ ಬದಲಾಯಿಸಿ ಅದನ್ನು ಮಸೀದಿ ಮಾಡಿರುವರು. ಅವರೇನೋ ಹಿಂದೂ ದೇವರನ್ನು ನಾಶಮಾಡಿರುವೆವೆಂದು ತಿಳಿದುಕೊಂಡಿರಬಹುದು. ಹಿಂದೂ ದೇವರಿಗೆ ಒಂದು ಆಕಾರವಿಲ್ಲ. ಒಂದು ಆಕಾರದಿಂದ ಅವನನ್ನು ಓಡಿಸಿದರೆ ಮತ್ತೊಂದು ಆಕಾರವನ್ನು ಅವನು ಸೇರುವನು! ಶಿವನಿಂದ ಓಡಿಸಿದರೆ ಅಲ್ಲನೊಳಗೇ ಅವನು ಸೇರುವನು. ಕೊನೆಗೆ ಎಲ್ಲಾ ಆಕಾರಗಳನ್ನು ನಾಶಮಾಡಿದರೂ ನಿರಾಕಾರನಾಗಿ ನಿಂತು ಮನುಷ್ಯರು ಹುಚ್ಚನ್ನು ನೋಡಿ ನಗುವನು..”

- ಸ್ವಾಮಿ ಸೋಮನಾಥಾನಂದರು, ತಮ್ಮ “ಈ ಹೈಮಾಚಲ ಸಾನ್ನಿಧ್ಯದಲ್ಲಿ” ಪುಸ್ತಕಕ್ಕೆ ಮುನ್ನುಡಿ ಬರೆದುಕೊಡಿ ಎಂದು ನಮ್ಮ ನಾಡಿನ ಮೆಚ್ಚಿನ ಕವಿ ಕುವೆಂಪು ಅವರನ್ನು ಕೇಳಿಕೊಂಡಾಗ,

“ನಿಮ್ಮ ಪುಸ್ತಕ ಓದುತ್ತೇನೆ, ಸಾಧ್ಯವಾದರೆ, ಪ್ರೇರಣೆಯಾದರೆ, ಬರೆಯುತ್ತೇನೆ. ಇಲ್ಲದಿದ್ದರೆ ಇಲ್ಲ. ನಾನು ಬರೆದುಕೊಡುತ್ತೇನೆಂದು ನೀವು ಬಂಬಲೂ ಬಾರದು, ನಿರೀಕ್ಷಿಸಲೂಬಾರದು” ಎಂದು ನಿರ್ದಾಕ್ಷಿಣ್ಯವಾಗಿ ಹೇಳಿದರಂತೆ. ಸ್ವಾಮೀಜಿವರೂ “ಆಗಲಿ” ಎಂದು ಹೇಳಿ ಹೊದರಂತೆ. ಕೊನೆಗೂ ಹದಿನಾಲ್ಕು ಪುಟಗಳಷ್ಟು ಮುನ್ನುಡಿ ಬರೆದು ಕೊಟ್ಟ ಕುವೆಂಪು ತಮ್ಮ ಮುನ್ನುಡಿಯಲ್ಲೇ ಹೀಗೆ ಬರೆಯುತ್ತಾರೆ. ಕುವೆಂಪು ಅವರ ಮುನ್ನುಡಿಯ ಸಾಲು ಸಾಲುಗಳೂ ಚೇತೋಹಾರಿಯಾಗಿವೆ...ನಮ್ಮನ್ನು ಚಿಂತನ ಶೀಲರನ್ನಾಗಿಸುತ್ತವೆ...

ನೋಡಿ ಅವಲೋಕನ- ಹೊಸಬೆಳಕು;ಹೊಸತಿರುವು!

No comments: